ಮೆಂತ್ಯ:
- ಒಂದೆರಡು ಚಮಚ ಮೆಂತ್ಯದ ಕಾಳುಗಳನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರಿನ ಜೊತೆ ತೆಗೆದುಕೊಂಡರೆ ತುಂಬಾ ಒಳ್ಳೆಯದು.
- ಮೆಂತ್ಯದ ಕಾಳುಗಳು ಮಧುಮೇಹ ರೋಗಿಗಳಿಗೆ ಉತ್ತಮ. ಅವರು ಈ ಕಾಳುಗಳನ್ನು ಯಾವ ರೀತಿಯಲ್ಲಾದರೂ ಪ್ರತಿದಿನ ಸೇವಿಸಿದ್ದರೆ ಬಹಳ ಒಳ್ಳೆಯದು.
- ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ರುಬ್ಬಿ ತಲೆಗೆ ಹಚ್ಚಿ, ಸ್ನಾನ ಮಾಡುವುದರಿಂದ ತಂಪು ಮತ್ತು ಕೂದಲಿಗೆ ಒಳ್ಳೆಯದು.
ಆ ಭಗವಂತನಿಂದ ನಮಗೆ ದೈವದತ್ತವಾಗಿ ಬಂದಿರುವ ಈ ಸೃಷ್ಟಿಯಲ್ಲಿ ಅನೇಕ ಗಿಡಮೂಲಿಕೆಗಳಿವೆ. ಪ್ರಕೃತಿಯಲ್ಲಿ ಕೆಲವಂತೂ ತುಂಬಾ ಉಪಯುಕ್ತವಾದವು. ಗಿಡ,ಮರ,ಬೇರು,ಚೆಕ್ಕೆ,ಎಲೆ,ಹೂವು,ಕಾಯಿ,ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಕಾಳುಗಳು,ನಮ್ಮ ನಿತ್ಯ ಜೀವನದಲ್ಲಿ ಬಹಳವಾಗಿ ಬಳಸುತ್ತೇವೆ.ಅವುಗಳಲ್ಲಿ ಕೆಲವನ್ನೂ ಉಪಯೋಗಿಸುವ ರೀತಿ ಮತ್ತು ಮನೆಮದ್ದು ಮಾಡಿಕೊಂಡು ಅವೆಲ್ಲವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಿಳಿಯೋಣ.ಉಪಯುಕ್ತ ಮಾಹಿತಿ ಮತ್ತು ಮನೆಮದ್ದು ತಯಾರಿಸುವ ಈ ಸಿರಿಗಂಧ ಟಿಪ್ಸ್ ಬ್ಲಾಗ್ ಗೆ ಸುಸ್ವಾಗತ.
Subscribe to:
Posts (Atom)