Twitter Facebook Feed
ಆ ಭಗವಂತನಿಂದ ನಮಗೆ ದೈವದತ್ತವಾಗಿ ಬಂದಿರುವ ಈ ಸೃಷ್ಟಿಯಲ್ಲಿ ಅನೇಕ ಗಿಡಮೂಲಿಕೆಗಳಿವೆ. ಪ್ರಕೃತಿಯಲ್ಲಿ ಕೆಲವಂತೂ ತುಂಬಾ ಉಪಯುಕ್ತವಾದವು. ಗಿಡ,ಮರ,ಬೇರು,ಚೆಕ್ಕೆ,ಎಲೆ,ಹೂವು,ಕಾಯಿ,ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಕಾಳುಗಳು,ನಮ್ಮ ನಿತ್ಯ ಜೀವನದಲ್ಲಿ ಬಹಳವಾಗಿ ಬಳಸುತ್ತೇವೆ.ಅವುಗಳಲ್ಲಿ ಕೆಲವನ್ನೂ ಉಪಯೋಗಿಸುವ ರೀತಿ ಮತ್ತು ಮನೆಮದ್ದು ಮಾಡಿಕೊಂಡು ಅವೆಲ್ಲವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಿಳಿಯೋಣ.ಉಪಯುಕ್ತ ಮಾಹಿತಿ ಮತ್ತು ಮನೆಮದ್ದು ತಯಾರಿಸುವ ಈ ಸಿರಿಗಂಧ ಟಿಪ್ಸ್ ಬ್ಲಾಗ್ ಗೆ ಸುಸ್ವಾಗತ.

OM SHRI GANESHAYA NAMAH:

" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "

Roti and Chapati Tips - ರೊಟ್ಟಿ ಮತ್ತು ಚಪಾತಿಯ ಟಿಪ್ಸ್




ರೊಟ್ಟಿ ಮತ್ತು ಚಪಾತಿಯ ಟಿಪ್ಸ್:

೧. ರೊಟ್ಟಿ ಮಾಡುವಾಗ ಸ್ವಲ್ಪ ನೀರನ್ನು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನಿಮಿಷ ಬಿಟ್ಟು ಅದನ್ನು ಗೊಟಾಯಿಸಿ, ಕಲೆಸಿ, ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ದೋಸೆಯಂತೆ ಮೃದುವಾಗಿ ಬರುತ್ತವೆ. (ಇದು ಒಂದು ರೀತಿ)
೨. ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವೆಜೆಟಬಲ್ ಗೀಯನ್ನು ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ, ಚೆನ್ನಾಗಿ ನಾದಿ,ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ.(ಈ ರೀತಿ ಸಹ ಒಂದು)
೩. ಇದೇರೀತಿ ಚಪಾತಿ ಹಿಟ್ಟಿಗೂ ಕಲೆಸಿದರೆ ಚಪಾತಿಗಳು ಸಹ ಚೆನ್ನಾಗಿ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.
೪. ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿ ಇಡಬೇಡಿ. ತುಂಬಾ ಹೊತ್ತು ನೆನೆಸಿದರೆ ಅದರಲ್ಲಿರುವ ಅಂಶಗಳೆಲ್ಲಾ ಹಾಳಾಗುತ್ತವೆ. ಅರ್ಧ ಅಥವಾ ಮುಕ್ಕಾಲು ಗಂಟೆ ನೆನೆಸಿದರೆ ಸಾಕು. ಹೆಚ್ಚೆಂದರೆ ಹದಿನೈದು ನಿಮಿಷಗಳಷ್ಟೇ ಸಾಕು.
೫. ಚಪಾತಿ ಹಿಟ್ಟನ್ನು ಕಲೆಸಿ ತಂಗಳು ಪೆಟ್ಟಿಗೆಯಲ್ಲಿ ಸಹ ಇಟ್ಟು ಉಪಯೋಗಿಸಿದರೆ ಅದರಲ್ಲಿನ ಸತ್ವಗಳೆಲ್ಲಾ ನಶಿಸುತ್ತವೆ.
೬. ಹಿಟ್ಟನ್ನು ತುಂಬಾ ಹೊತ್ತು ನೆನೆಸಿದರೆ ಚಪಾತಿಗಳೇನೋ ಮೃದುವಾಗಿ ಬರುತ್ತವೆ,ಆದರೆ ಅದರಲ್ಲಿನ ಒಳ್ಳೆಯ ಸತ್ವಯುತ ಅಂಶಗಳು ಇರುವುದಿಲ್ಲ.
೭. ಗೋಧಿ ಹಿಟ್ಟು ಬೀಸಲು ಕೊಡುವಾಗ ಅದಕ್ಕೆ ಮೆಂತ್ಯ,ಹೆಸರುಕಾಳು ಮತ್ತು ಉಪ್ಪು ಹಾಕಿ ಬೀಸಿಟ್ಟುಕೊಂಡರೆ,ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.ಜೊತೆಯಲ್ಲಿ ಸೋಯಾಬೀನ್ಸ್ ಸಹ ಸೇರಿಸಬಹುದು.
೮. ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ,ರೊಟ್ಟಿ ತಯಾರಿಸಿದರೆ,ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.
೯. ಯಾವುದೇ ತರಹದ ರೊಟ್ಟಿಗಳು ತಯಾರಿಸುವಾಗ ಕೆಲವೊಮ್ಮೆ ಅದಕ್ಕೆ ಕೆಲವು ತರಕಾರಿಗಳನ್ನು ಸೇರಿಸಿ ತಯಾರಿಸಿದರೆ, ರುಚಿಯೂ ಬೇರೆ ರೀತಿಯಾಗಿ ಚೆನ್ನಾಗಿರುತ್ತದೆ. ಮತ್ತು ವಿಟಮಿನ್ಸ್ ಮತ್ತು ಪ್ರೋಟಿನ್ಸ್ ಸಿಗುತ್ತದೆ ಹಾಗೂ ಬಗೆಬಗೆಯ ರೊಟ್ಟಿಗಳನ್ನು ಸವಿಯಬಹುದು.

Washing tips for Copper/Brass Things

ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಹುಣಸೇಹಣ್ಣು ಮತ್ತು ಉಪ್ಪು ಹಾಕಿ ಉಜ್ಜಿ, ತೊಳೆಯುವುದರಿಂದ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಕೆಮ್ಮಣ್ಣು ಸಹ ಹಾಕಿ ಉಜ್ಜಿ ತೊಳೆಯುವುದರಿಂದಲೂ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಆದಷ್ಟು ಪೀತಾಂಬರಿ ಅಂತಹ ಪೌಡರ್ ಗಳನ್ನು ಉಪಯೋಗಿಸದಿರಿ, ಇದರಿಂದ ನಿಮಗೆ ಕೆಲವು ತೊಂದರೆಗಳು ಉಂಟಾಗುತ್ತವೆ. ಅದರಲ್ಲಿ ಕೆಮಿಕಲ್ಸ್ ಹಾಕಿರುವುದರಿಂದ ಅದು ಅಷ್ಟು ಒಳ್ಳೆಯದಲ್ಲ.

Fenugreek Seeds - ಮೆಂತ್ಯ:

ಮೆಂತ್ಯ:

- ಒಂದೆರಡು ಚಮಚ ಮೆಂತ್ಯದ ಕಾಳುಗಳನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರಿನ ಜೊತೆ ತೆಗೆದುಕೊಂಡರೆ ತುಂಬಾ ಒಳ್ಳೆಯದು.
- ಮೆಂತ್ಯದ ಕಾಳುಗಳು ಮಧುಮೇಹ ರೋಗಿಗಳಿಗೆ ಉತ್ತಮ. ಅವರು ಈ ಕಾಳುಗಳನ್ನು ಯಾವ ರೀತಿಯಲ್ಲಾದರೂ ಪ್ರತಿದಿನ ಸೇವಿಸಿದ್ದರೆ ಬಹಳ ಒಳ್ಳೆಯದು.
- ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ರುಬ್ಬಿ ತಲೆಗೆ ಹಚ್ಚಿ, ಸ್ನಾನ ಮಾಡುವುದರಿಂದ ತಂಪು ಮತ್ತು ಕೂದಲಿಗೆ ಒಳ್ಳೆಯದು.
Related Posts Plugin for WordPress, Blogger...

ಮನೆಮದ್ದು ಮತ್ತು ಉಪಯೋಗಗಳು Headline

ಮನೆಮದ್ದು ಮತ್ತು ಉಪಯೋಗಗಳು # HOME REMEDIES AND USEFUL TIPS